ಆ ದಿನಗಳು.....
ಅವನೊಬ್ಬ ಬಾಳ ಪಯಣದ ದಾರಿಹೋಕ.ಬಾಳ ಹಾದಿಯಲ್ಲಿ ನಡೆಯುವುದು ಅವನ ಕಾಯಕ. ಕೆಲವೊಮ್ಮೆ ಈ ಬಾಳ ಹಾದಿಯು ಕಲ್ಲು ಮುಳ್ಳುಗಳಿಂದ ಕೂಡಿದಾಗ ಇನ್ನೆಷ್ಟು ದಿನ ಈ ಪಯಣ? ಎಂದು ಚಿಂತಿಸುತ್ತಿದ್ದ.
ಅವನೊಬ್ಬ ಬಾಳ ಪಯಣದ ದಾರಿಹೋಕ.ಬಾಳ ಹಾದಿಯಲ್ಲಿ ನಡೆಯುವುದು ಅವನ ಕಾಯಕ. ಕೆಲವೊಮ್ಮೆ ಈ ಬಾಳ ಹಾದಿಯು ಕಲ್ಲು ಮುಳ್ಳುಗಳಿಂದ ಕೂಡಿದಾಗ ಇನ್ನೆಷ್ಟು ದಿನ ಈ ಪಯಣ? ಎಂದು ಚಿಂತಿಸುತ್ತಿದ್ದ.
ಉತ್ತರ ತಿಳಿಯದಾದಾಗ , ತನ್ನನ್ನು ತಾನು ಸಮಾಧಾನ ಮಾಡಿಕೊಂಡು ಸಾಗಿತ್ತು ಅವನ ಜೀವನ ಯಾತ್ರೆ. ಹೀಗೆ ಸಾಗುತ್ತಿರುವಾಗ ಕಂಡು ಬಂತು ಒಂದು ಸುಂದರ ದೃಶ್ಯ!, ಅಲ್ಲಿ ಕೃತ್ರಿಮತೆ ಇರಲಿಲ್ಲ, ನಗೆಯಿತ್ತು, ಜಗಳ, ಹುಸಿಗೋಪಗಳಿದ್ದವು. ಆದರೆ ಅದರ ಹಿಂದೆ ದ್ವೇಷದ ಕರಿಛಾಯೆಯಿರಲಿಲ್ಲ. ಅಲ್ಲಿ ಪ್ರಕೃತಿ ನೆಲೆಸಿತ್ತು.ಎಲ್ಲದಕ್ಕೂ ಹೆಚ್ಚಾಗಿ ಕ್ಷಣ ಕ್ಷಣಕ್ಕೂ ವಿಸ್ಮಿತಗೊಳ್ಳುವ ಮುಗ್ಧ ಮನಸ್ಸಿತ್ತು. ನೋಡುತ್ತಾ ನಿಂತ ಅವನ ಮನಸ್ಸು ಆನಂದದಿಂದ ಕುಣಿದಾಡುತ್ತಿತ್ತು . ನೋಡುತ್ತಾ ನಿಂತವ ತನ್ನ ಬಾಳ ಆ ಆದಿಯೆಡೆಗೆ ಹಿಂತಿರುಗಿ ನೋಡಿದ. ಆಗಲೇ ಅಲ್ಲಿಂದ ದೂರ, ಹಿಂತಿರುಗಲಾರದಷ್ಟು ದೂರ ಬಂದಿದ್ದ.ಅದು ಇನ್ನು ಕೇವಲ ಸುಮಧುರ ನೆನಪುಗಳ ಕಂತೆ ಮಾತ್ರವೆಂದು ಆತನಿಗೆ ತಿಳಿದಿತ್ತು. ಆ ನೆನಪಿನಲ್ಲಿ ಮಿಂದೆದ್ದು ಬಂದಾಗಲೆಲ್ಲ ಅವನಿಗೆ ಏನೋ ಹರುಷ, ಹೊಸ ಉತ್ಸಾಹ.ಹೀಗೆ ನವ ಚೈತನ್ಯವ ತುಂಬಿಕೊಳ್ಳುತ್ತಾ ಸಾಗಿತ್ತು ಅವನ ಪಯಣ. ಅಲ್ಲವೇ ಮಧುರ ಆದಿನಗಳು!!!.
ಒಮ್ಮೆ ಯೋಚಿಸಿದರೆ ಇದು ನಮ್ಮೆಲ್ಲರ ಕಥೆಯೂ ಹೌದಲ್ಲವೇ? ......